ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ | ಏಕಮಾಪಾತಮಧುರಂ - ಅನ್ಯದಾಲೋಚನಾಮೃತಮ್ || ಸುಭಾಷಿತಮ್ ||
ಸಂಗೀತವೆಂದರೆ ಚೆನ್ನಾಗಿ ಹಾಡುವುದು. ಇದರಲ್ಲಿ ಗಾಯನ, ವಾದನ ಮತ್ತು ನರ್ತನ ಎಂಬ ಮೂರು ಅಂಶಗಳು ಮೇಳೈಸಿವೆ. ಹಾಗಾಗಿ ಸಂಗೀತವನ್ನು ತ್ರಿತಯ ಎಂದೂ ಕರೆಯುತ್ತಾರೆ. ಇವು ಮೂರೂ ಪ್ರಕಾರಗಳು (ಹಾಡು, ವಾದ್ಯ ಮತ್ತು ನೃತ್ಯ) ಬೇರೆ ಬೇರೆಯಾಗಿ ಸ್ವತಂತ್ರವೋ ಎಂಬಂತೆ ಇಂದು ಬೆಳೆದು ನಿಂತಿವೆ. ಅದರಂತೆ ಇವು ಪರಸ್ಪರ ಗಾಢವಾಗಿ ಬೆಸೆದು ಕೊಂಡಿವೆ. ಆದರೆ ಇಂದು ಸಂಗೀತ ಶಬ್ದ ಗಾಯನಕ್ಕೆ ಮಾತ್ರ ಸೀಮಿತವಾಗಿ ಬಳಕೆಯಾಗುತ್ತಿದೆ. ಪ್ರಕೃತ ಲೇಖನದಲ್ಲಿ ಸಂಗೀತ ಪದ ತ್ರಿತಯವನ್ನೂ ಪ್ರತಿನಿಧಿಸುತ್ತದೆ. ಗೀತ, ವಾದ್ಯ ಮತ್ತು ನೃತ್ಯಗಳಲ್ಲಿ (ಸಂಗೀತದಲ್ಲಿ) ನಾದ ಮತ್ತು ಲಯಗಳೆಂಬ ಎರಡು ಅಂಶಗಳು; ಇಡೀ ಸಂಗೀತದ ತ್ರಿತಯಗಳನ್ನು ಪರಸ್ಪರ ಒಂದನ್ನೊಂದು ಬೆಸೆದು ಕೊಳ್ಳಲು ಮತ್ತು ರೂಪುಗೊಳ್ಳಲು ಸಹಕಾರಿಯಾಗಿ ನಿಂತಿವೆ. ಇವು ಸಂಗೀತ ಪ್ರಪಂಚದುದ್ದಕ್ಕೂ ಹಾಸುಹೊಕ್ಕಾಗಿವೆ.


ಈ ಗಂಧರ್ವ ವೇದದಲ್ಲಿ ನೃತ್ಯ ಹಾಗೂ ಗಾಯನಕ್ಕೆ ಸಂಬಂಧಿಸಿದ ಹಲವು ಪ್ರಾಚೀನ ವಿಷಯಗಳನ್ನು ನಾವು ನೋಡಬಹುದು. ರಾಗ, ರಾಗಿಣೀ, ತಾಳ, ಸ್ವರ, ವಾದ್ಯಗಳು ಮತ್ತು ನೃತ್ಯಗಳ ಭೇದೋಪಭೇದಗಳ ವರ್ಣನೆಗಳು ಇಲ್ಲಿವೆ. ಇನ್ನು ಸಾಮಗಾನದ ಗೇಯಪ್ರಕಾರಗಳು ಮತ್ತು ಶಾಖೋಪಶಾಖೆಗಳು ಇಂದಿಗೆ ಸರಿಸುಮಾರು ಲುಪ್ತವಾಗಿಹೋಗಿವೆ. ಆದರೂ ಪ್ರಾಚೀನ ನೃತ್ಯಶಾಸ್ತ್ರಗಳಲ್ಲಿ ಭರತನ ನಾಟ್ಯಶಾಸ್ತ್ರ, ದತ್ತಿಲಮುನಿಯ ದತ್ತಿಲಮ್, ಶಾರ್ಙದೇವನ ಸಂಗೀತ ರತ್ನಾಕರ ಮತ್ತು ದಾಮೋದರನ ಸಂಗೀತ ದರ್ಪಣ ಗ್ರಂಥಗಳು ಇಂದಿಗೂ ಆಧಾರವಾಗಿದ್ದು, ನಾಟ್ಯದ ವಿವಿಧರೂಪಗಳು, ರಸಭಾವಗಳು, ಸ್ವರ, ತಾಳ, ಲಯಗಳ ವಿಸ್ತೃತ ವರ್ಣನೆಗಳನ್ನು ನಾವಿಲ್ಲಿ ಗಮನಿಸಬಹುದು. ಒಟ್ಟಿನಲ್ಲಿ ಸಾಮವೇದದ ಉಪವೇದವಾದ ಗಂಧರ್ವವೇದದಲ್ಲಿ ಈ ಸಂಗೀತದ ಕುರಿತ ಮೂಲಭೂತವಾದ ವಿಚಾರಗಳು ಮೊದಲು ಬೆಳಕಿಗೆ ಬಂದವು.

ಳೆಂದು ಕೊಂಡಾಡಿದ್ದಾರೆ. ಒಂದು ಎದೆಯಲ್ಲಿ ಸಂಗೀತವನ್ನೂ, ಇನ್ನೊಂದರಲ್ಲಿ ವೇದವಾಙ್ಮಯವನ್ನೂ ಅಂದರೆ ಸಾಹಿತ್ಯವನ್ನೂ ತುಂಬಿಕೊಂಡಿದ್ದಾಳೆ. ಇದರಿಂದ ಭಾರತೀಯರಿಗೆ ಅಮೃತವನ್ನುಣಿಸಿದ್ದಾಳೆ. ಸಂಗೀತಾಮೃತದಿಂದ ರಸ ಮಾಧುರ್ಯವನ್ನೂ, ಸಾಹಿತ್ಯಾಮೃತದಿಂದ ವಿಚಾರ ವೈಶಾಲ್ಯವನ್ನೂ (ನಾವು ಸಣ್ಣವರಿದ್ದಾಗಲೇ) ನಮಗೆ ನೀಡಿ, ನಮ್ಮ ಮನೋ ವೇದಿಕೆಗಳಾದ ಭಾವ ಮತ್ತು ಬುದ್ಧಿಗಳನ್ನು ವಿಕಾಸಗೊಳಿಸಿದ್ದಾಳೆ. ಅದಕ್ಕೆ ಭಾರತೀಯರಾದ ನಾವು ಧನ್ಯರು. ಭಾವ ಮತ್ತು ಬುದ್ಧಿ ಪ್ರಪಂಚದಲ್ಲಿನ ದಕ್ಷತೆಯೇ ಬದುಕಿನ ಬಹುದೊಡ್ಡ ಸಾಧನೆಯಲ್ಲವೇ?