ಅಥ ಶಿಕ್ಷಾಂ ಪ್ರವಕ್ಷ್ಯಾಮಿ ಪಾಣಿನೀಯಂ ಮತಂ ಯಥಾ ।
ಶಾಸ್ತ್ರಾನುಪೂರ್ವಂ ತದ್ವಿದ್ಯಾದ್ಯಥೋಕ್ತಂ ಲೋಕವೇದಯೋಃ ॥ 1॥
ಪ್ರಸಿದ್ಧಮಪಿ ಶಬ್ದಾರ್ಥಮವಿಜ್ಞಾತಮಬುದ್ಧಿಭಿಃ ।
ಪುನರ್ವ್ಯಕ್ತೀಕರಿಷ್ಯಾಮಿ ವಾಚ ಉಚ್ಚಾರಣೇ ವಿಧಿಮ್ ॥ 2॥
ತ್ರಿಷಷ್ಟಿಶ್ಚತುಃಷಷ್ಟಿರ್ವಾ ವರ್ಣಾಃ ಶಂಭುಮತೇ ಮತಾಃ ।
ಪ್ರಾಕೃತೇ ಸಂಸ್ಕೃತೇ ಚಾಪಿ ಸ್ವಯಂ ಪ್ರೋಕ್ತಾಃ ಸ್ವಯಂಭುವಾ ॥ 3॥
ಸ್ವರಾವಿಂಶತಿರೇಕಶ್ಚ ಸ್ಪರ್ಶಾನಾಂ ಪಂಚವಿಂಶತಿಃ ।
ಯಾದಯಶ್ಚ ಸ್ಮೃತಾ ಹ್ಯಷ್ಟೌ ಚತ್ವಾರಶ್ಚ ಯಮಾಃ ಸ್ಮೃತಾಃ ॥ 4॥
ಅನುಸ್ವಾರೋ ವಿಸರ್ಗಶ್ಚ ಕ ಪೌ ಚಾಪಿ ಪರಾಶ್ರಿತೌ ।
ದುಸ್ಪೃಷ್ಟಶ್ಚೇತಿ ವಿಜ್ಞೇಯೋ ೡಕಾರಃ ಪ್ಲುತ ಏವ ಚ ॥ 5॥
ಆತ್ಮಾ ಬುದ್ಧ್ಯಾ ಸಮೇತ್ಯಾರ್ಥಾನ್ಮನೋಯುಂಕ್ತೇ ವಿವಕ್ಷಯಾ ।
ಮನಃ ಕಾಯಾಗ್ನಿಮಾಹಂತಿ ಸ ಪ್ರೇರಯತಿ ಮಾರುತಮ್ ॥ 6॥
ಮಾರುಸ್ತೂರಸಿಚರನ್ಮಂದ್ರಂ ಜನಯತಿ ಸ್ವರಮ್ ।
ಪ್ರಾತಃಸವನಯೋಗಂ ತಂ ಛಂದೋಗಾಯತ್ರಮಾಶ್ರಿತಮ್ ॥ 7॥
ಕಂಠೇಮಾಧ್ಯಂದಿನಯುಗಂ ಮಧ್ಯಮಂ ತ್ರೈಷ್ಟುಭಾನುಗಮ್ ।
ತಾರಂ ತಾರ್ತೀಯಸವನಂ ಶೀರ್ಷಣ್ಯಂ ಜಾಗತಾನುಗತಮ್ ॥ 8॥
ಸೋದೀರ್ಣೋ ಮೂರ್ಧ್ನ್ಯಭಿಹತೋವಕ್ರಮಾಪದ್ಯ ಮಾರುತಃ ।
ವರ್ಣಾಂಜನಯತೇತೇಷಾಂ ವಿಭಾಗಃ ಪಂಚಧಾ ಸ್ಮೃತಃ ॥ 9॥
ಸ್ವರತಃ ಕಾಲತಃ ಸ್ಥಾನಾತ್ ಪ್ರಯತ್ನಾನುಪ್ರದಾನತಃ ।
ಇತಿ ವರ್ಣವಿದಃ ಪ್ರಾಹುರ್ನಿಪುಣಂ ತನ್ನಿಬೋಧತ ॥ 10॥
ಉದಾತ್ತಶ್ಚಾನುದಾತ್ತಶ್ಚ ಸ್ವರಿತಶ್ಚ ಸ್ವರಾಸ್ತ್ರಯಃ ।
ಹ್ರಸ್ವೋ ದೀರ್ಘಃ ಪ್ಲುತ ಇತಿ ಕಾಲತೋ ನಿಯಮಾ ಅಚಿ ॥ 11॥
ಉದಾತ್ತೇ ನಿಷಾದಗಾಂಧಾರಾವನುದಾತ್ತ ಋಷಭಧೈವತೌ ।
ಸ್ವರಿತಪ್ರಭವಾ ಹ್ಯೇತೇ ಷಡ್ಜಮಧ್ಯಮಪಂಚಮಾಃ ॥ 12॥
ಅಷ್ಟೌಸ್ಥಾನಾನಿ ವರ್ಣಾನಾಮುರಃ ಕಂಠಃ ಶಿರಸ್ತಥಾ ।
ಜಿಹ್ವಾಮೂಲಂ ಚ ದಂತಾಶ್ಚ ನಾಸಿಕೋಷ್ಠೌಚ ತಾಲು ಚ ॥ 13॥
ಓಭಾವಶ್ಚ ವಿವೃತ್ತಿಶ್ಚ ಶಷಸಾ ರೇಫ ಏವ ಚ ।
ಜಿಹ್ವಾಮೂಲಮುಪಧ್ಮಾ ಚ ಗತಿರಷ್ಟವಿಧೋಷ್ಮಣಃ ॥ 14॥
ಯದ್ಯೋಭಾವಪ್ರಸಂಧಾನಮುಕಾರಾದಿ ಪರಂ ಪದಮ್ ।
ಸ್ವರಾಂತಂ ತಾದೃಶಂ ವಿದ್ಯಾದ್ಯದನ್ಯದ್ವ್ಯಕ್ತಮೂಷ್ಮಣಃ ॥ 15॥
ಹಕಾರಂ ಪಂಚಮೈರ್ಯುಕ್ತಮಂತಃಸ್ಥಾಭಿಶ್ಚ ಸಂಯುತಮ್ ।
ಉರಸ್ಯಂ ತಂ ವಿಜಾನೀಯಾತ್ಕಂಠ್ಯಮಾಹುರಸಂಯುತಮ್ ॥ 16॥
ಕಂಠ್ಯಾವಹಾವಿಚುಯಶಾಸ್ತಾಲವ್ಯಾ ಓಷ್ಠಜಾವುಪೂ ।
ಸ್ಯುರ್ಮೂರ್ಧನ್ಯಾ ಋಟುರಷಾ ದಂತ್ಯಾ ಌತುಲಸಾಃ ಸ್ಮೃತಾಃ ॥ 17॥
ಜಿಹ್ವಾಮೂಲೇ ತು ಕುಃ ಪ್ರೋಕ್ತೋ ದಂತ್ಯೋಷ್ಠ್ಯೋ ವಃ ಸ್ಮೃತೋ ಬುಧೈಃ ।
ಏಐ ತು ಕಂಠತಾಲವ್ಯಾ ಓಔ ಕಂಠೋಷ್ಠಜೌ ಸ್ಮೃತೌ ॥ 18॥
ಅರ್ಧಮಾತ್ರಾ ತು ಕಂಠ್ಯಸ್ಯ ಏಕಾರೈಕಾರಯೋರ್ಭವೇತ್ ।
ಓಕಾರೌಕಾರಯೋರ್ಮಾತ್ರಾ ತಯೋರ್ವಿವೃತಸಂವೃತಮ್ ॥ 19॥
ಸಂವೃತಂ ಮಾತ್ರಿಕಂ ಜ್ಞೇಯಂ ವಿವೃತಂ ತು ದ್ವಿಮಾತ್ರಿಕಮ್ ।
ಘೋಷಾ ವಾ ಸಂವೃತಾಃ ಸರ್ವೇ ಅಘೋಷಾ ವಿವೃತಾಃ ಸ್ಮೃತಾಃ ॥ 20॥
ಸ್ವರಾಣಾಮೂಷ್ಮಣಾಂ ಚೈವ ವಿವೃತಂ ಕರಣಂ ಸ್ಮೃತಮ್ ।
ತೇಭ್ಯೋಽಪಿ ವಿವೃತಾವೇಙೌ ತಾಭ್ಯಾಮೈಚೌ ತಥೈವ ಚ ॥ 21॥
ಅನುಸ್ವಾರಯಮಾನಾಂ ಚ ನಾಸಿಕಾ ಸ್ಥಾನಮುಚ್ಯತೇ ।
ಅಯೋಗವಾಹಾ ವಿಜ್ಞೇಯಾ ಆಶ್ರಯಸ್ಥಾನಭಾಗಿನಃ ॥ 22॥
ಅಲಾಬುವೀಣಾನಿರ್ಘೋಷೋ ದಂತ್ಯಮೂಲ್ಯಸ್ವರಾನುಗಃ ।
ಅನುಸ್ವಾರಸ್ತು ಕರ್ತವ್ಯೋ ನಿತ್ಯಂ ಹ್ರೋಃ ಶಷಸೇಷು ಚ ॥ 23॥
ಅನುಸ್ವಾರೇ ವಿವೃತ್ತ್ಯಾಂ ತು ವಿರಾಮೇ ಚಾಕ್ಷರದ್ವಯೇ ।
ದ್ವಿರೋಷ್ಠ್ಯೌ ತು ವಿಗೃಹ್ಣೀಯಾದ್ಯತ್ರೋಕಾರವಕಾರಯೋಃ ॥ 24॥
ವ್ಯಾಘ್ರೀ ಯಥಾ ಹರೇತ್ಪುತ್ರಾಂದಂಷ್ಟ್ರಾಭ್ಯಾಂ ನ ಚ ಪೀಡಯೇತ್ ।
ಭೀತಾ ಪತನಭೇದಾಭ್ಯಾಂ ತದ್ವದ್ವರ್ಣಾನ್ಪ್ರಯೋಜಯೇತ್ ॥ 25॥
ಯಥಾ ಸೌರಾಷ್ಟ್ರಿಕಾ ನಾರೀ ತಕ್ರँ ಇತ್ಯಭಿಭಾಷತೇ
।
ಏವಂ ರಂಗಾಃ ಪ್ರಯೋಕ್ತವ್ಯಾಃ ಖೇ ಅರಾँ ಇವ ಖೇದಯಾ ॥ 26॥
ರಂಗವರ್ಣಂ ಪ್ರಯುಂಜೀರನ್ನೋ ಗ್ರಸೇತ್ಪೂರ್ವಮಕ್ಷರಮ್ ।
ದೀರ್ಘಸ್ವರಂ ಪ್ರಯುಂಜೀಯಾತ್ಪಶ್ಚಾನ್ನಾಸಿಕ್ಯಮಾಚರೇತ್ ॥ 27॥
ಹೃದಯೇ ಚೈಕಮಾತ್ರಸ್ತ್ವರ್ದ್ಧಮಾತ್ರಸ್ತು ಮೂರ್ದ್ಧನಿ ।
ನಾಸಿಕಾಯಾಂ ತಥಾರ್ದ್ಧಂ ಚ ರಂಗಸ್ಯೈವಂ ದ್ವಿಮಾತ್ರತಾ ॥ 28॥
ಹೃದಯಾದುತ್ಕರೇ ತಿಷ್ಠನ್ಕಾಂಸ್ಯೇನ ಸಮನುಸ್ವರನ್ ।
ಮಾರ್ದವಂ ಚ ದ್ವಿಮಾತ್ರಂ ಚ ಜಘನ್ವಾँ ಇತಿ
ನಿದರ್ಶನಮ್ ॥ 29॥
ಮಧ್ಯೇ ತು ಕಂಪಯೇತ್ಕಂಪಮುಭೌ ಪಾರ್ಶ್ವೌ ಸಮೌ ಭವೇತ್ ।
ಸರಂಗಂ ಕಂಪಯೇತ್ಕಂಪಂ ರಥೀವೇತಿ ನಿದರ್ಶನಮ್ ॥ 30॥
ಏವಂ ವರ್ಣಾಃ ಪ್ರಯೋಕ್ತವ್ಯಾ ನಾವ್ಯಕ್ತಾ ನ ಚ ಪೀಡಿತಾಃ ।
ಸಮ್ಯಗ್ವರ್ಣಪ್ರಯೋಗೇಣ ಬ್ರಹ್ಮಲೋಕೇ ಮಹೀಯತೇ ॥ 31॥
ಗೀತೀ ಶೀಘ್ರೀ ಶಿರಃಕಂಪೀ ತಥಾ ಲಿಖಿತಪಾಠಕಃ ।
ಅನರ್ಥಜ್ಞೋಽಲ್ಪಕಂಠಶ್ಚ ಷಡೇತೇ ಪಾಠಕಾಧಮಾಃ ॥ 32॥
ಮಾಧುರ್ಯಮಕ್ಷರವ್ಯಕ್ತಿಃ ಪದಚ್ಛೇದಸ್ತು ಸುಸ್ವರಃ ।
ಧೈರ್ಯಂ ಲಯಸಮರ್ಥಂ ಚ ಷಡೇತೇ ಪಾಠಕಾ ಗುಣಾಃ ॥ 33॥
ಶಂಕಿತಂ ಭೀತಿಮುದ್ಘೃಷ್ಟಮವ್ಯಕ್ತಮನುನಾಸಿಕಮ್ ।
ಕಾಕಸ್ವರಂ ಶಿರಸಿಗಂ ತಥಾ ಸ್ಥಾನವಿವಜಿರ್ತಮ್ ॥ 34॥
ಉಪಾಂಶುದಷ್ಟಂ ತ್ವರಿತಂ ನಿರಸ್ತಂ ವಿಲಂಬಿತಂ ಗದ್ಗದಿತಂ ಪ್ರಗೀತಮ್ ।
ನಿಷ್ಪೀಡಿತಂ ಗ್ರಸ್ತಪದಾಕ್ಷರಂ ಚ ವದೇನ್ನ ದೀನಂ ನ ತು ಸಾನುನಾಸ್ಯಮ್ ॥ 35॥
ಪ್ರಾತಃ ಪಠೇನ್ನಿತ್ಯಮುರಃಸ್ಥಿತೇನ ಸ್ವರೇಣ ಶಾರ್ದೂಲರುತೋಪಮೇನ ।
ಮಧ್ಯಂದಿನೇ ಕಂಠಗತೇನ ಚೈವ ಚಕ್ರಾಹ್ವಸಂಕೂಜಿತಸನ್ನಿಭೇನ ॥ 36॥
ತಾರಂ ತು ವಿದ್ಯಾತ್ಸವನಂ ತೃತೀಯಂ ಶಿರೋಗತಂ ತಚ್ಚ ಸದಾ ಪ್ರಯೋಜ್ಯಮ್ ।
ಮಯೂರಹಂಸಾನ್ಯಭೃತಸ್ವರಾಣಾಂ ತುಲ್ಯೇನ ನಾದೇನ ಶಿರಃಸ್ಥಿತೇನ ॥ 37॥
ಅಚೋಽಸ್ಪೃಷ್ಟಾ ಯಣಸ್ತ್ವೀಷನ್ನೇಮಸ್ಪೃಷ್ಟಾಃ ಶಲಃ ಸ್ಮೃತಾಃ ।
ಶೇಷಾಃ ಸ್ಪೃಷ್ಟಾ ಹಲಃ ಪ್ರೋಕ್ತಾ ನಿಬೋಧಾನುಪ್ರದಾನತಃ ॥ 38॥
ಞಮೋನುನಾಸಿಕಾ ನ ಹ್ರೌ ನಾದಿನೋ ಹಝಷಃ ಸ್ಮೃತಾಃ ।
ಈಷನ್ನಾದಾ ಯಣೋ ಜಶಃ ಶ್ವಾಸಿನಸ್ತು ಖಫಾದಯಃ ॥ 39॥
ಈಷಚ್ಛ್ವಾಸಾಂಶ್ಚರೋ ವಿದ್ಯಾದ್ಗೋರ್ಧಾಮೈತತ್ಪ್ರಚಕ್ಷತೇ ।
ದಾಕ್ಷೀಪುತ್ರಪಾಣಿನಿನಾ ಯೇನೇದಂ ವ್ಯಾಪಿತಂ ಭುವಿ ॥ 40॥
ಛಂದಃ ಪಾದೌ ತು ವೇದಸ್ಯ ಹಸ್ತೌ ಕಲ್ಪೋಽಥ ಪಠ್ಯತೇ ।
ಜ್ಯೋತಿಷಾಮಯನಂ ಚಕ್ಷುರ್ನಿರುಕ್ತಂ ಶ್ರೋತ್ರಮುಚ್ಯತೇ ॥ 41॥
ಶಿಕ್ಷಾ ಘ್ರಾಣಂ ತು ವೇದಸ್ಯ ಮುಖಂ ವ್ಯಾಕರಣಂ ಸ್ಮೃತಮ್ ।
ತಸ್ಮಾತ್ಸಾಂಗಮಧೀತ್ಯೈವ ಬ್ರಹ್ಮಲೋಕೇ ಮಹೀಯತೇ ॥ 42॥
ಉದಾತ್ತಮಾಖ್ಯಾತಿ ವೃಷೋಽಂಗುಲೀನಾಂ ಪ್ರದೇಶಿನೀಮೂಲನಿವಿಷ್ಟಮೂರ್ಧಾ ।
ಉಪಾಂತಮಧ್ಯೇ ಸ್ವರಿತಂ ದ್ರುತಂ ಚ ಕನಿಷ್ಠಕಾಯಾಮನುದಾತ್ತಮೇವ ॥ 43॥
ಉದಾತ್ತಂ ಪ್ರದೇಶಿನೀಂ ವಿದ್ಯಾತ್ಪ್ರಚಯಂ ಮಧ್ಯತೋಽಂಗುಲಿಮ್ ।
ನಿಹತಂ ತು ಕನಿಷ್ಠಿಕ್ಯಾಂ ಸ್ವರಿತೋಪಕನಿಷ್ಠಿಕಾಮ್ ॥ 44॥
ಅಂತೋದಾತ್ತಮಾದ್ಯುದಾತ್ತಮುದಾತ್ತಮನುದಾತ್ತಂ ನೀಚಸ್ವರಿತಮ್ ।
ಮಧ್ಯೋದಾತ್ತಂ ಸ್ವರಿತಂ ದ್ವ್ಯುದಾತ್ತಂ ತ್ರ್ಯುದಾತ್ತಮಿತಿ ನವಪದಶಯ್ಯಾ ॥ 45॥
ಅಗ್ನಿಃ ಸೋಮಃ ಪ್ರ ವೋ ವೀರ್ಯಂ ಹವಿಷಾಂ ಸ್ವರ್ಬೃಹಸ್ಪತಿರಿಂದ್ರಾಬೃಹಸ್ಪತೀ ।
ಅಗ್ನಿರಿತ್ಯಂತೋದಾತ್ತಂ ಸೋಮ ಇತ್ಯಾದ್ಯುದಾತ್ತಮ್ ।
ಪ್ರೇತ್ಯುದಾತ್ತಂ ವ ಇತ್ಯನುದಾತ್ತಂ ವೀರ್ಯಂ ನೀಚಸ್ವರಿತಮ್ ॥ 46॥
ಹವಿಷಾಂ ಮಧ್ಯೋದಾತ್ತಂ ಸ್ವರಿತಿ ಸ್ವರಿತಮ್ ।
ಬೃಹಸ್ಪತಿರಿತಿ ದ್ವ್ಯುದಾತ್ತಮಿಂದ್ರಾಬೃಹಸ್ಪತೀ ಇತಿ ತ್ರ್ಯುದಾತ್ತಮ್ ॥ 47॥
ಅನುದಾತ್ತೋ ಹೃದಿ ಜ್ಞೇಯೋ ಮೂರ್ಧ್ನ್ಯುದಾತ್ತ ಉದಾಹೃತಃ ।
ಸ್ವರಿತಃ ಕರ್ಣಮೂಲೀಯಃ ಸರ್ವಾಸ್ಯೇ ಪ್ರಚಯಃ ಸ್ಮೃತಃ ॥ 48॥
ಚಾಷಸ್ತು ವದತೇ ಮಾತ್ರಾಂ ದ್ವಿಮಾತ್ರಂ ಚೈವ ವಾಯಸಃ ।
ಶಿಖೀ ರೌತಿ ತ್ರಿಮಾತ್ರಂ ತು ನಕುಲಸ್ತ್ವರ್ಧಮಾತ್ರಕಮ್ ॥ 49॥
ಕುತೀರ್ಥಾದಾಗತಂ ದಗ್ಧಮಪವರ್ಣಂ ಚ ಭಕ್ಷಿತಮ್ ।
ನ ತಸ್ಯ ಪಾಠೇ ಮೋಕ್ಷೋಽಸ್ತಿ ಪಾಪಾಹೇರಿವ ಕಿಲ್ಬಿಷಾತ್ ॥ 50॥
ಸುತೀರ್ಥಾದಗತಂ ವ್ಯಕ್ತಂ ಸ್ವಾಮ್ನಾಯ್ಯಂ ಸುವ್ಯವಸ್ಥಿತಮ್ ।
ಸುಸ್ವರೇಣ ಸುವಕ್ತ್ರೇಣ ಪ್ರಯುಕ್ತಂ ಬ್ರಹ್ಮ ರಾಜತೇ ॥ 51॥
ಮಂತ್ರೋ ಹೀನಃ ಸ್ವರತೋ ವರ್ಣತೋ ವಾ ಮಿಥ್ಯಾಪ್ರಯುಕ್ತೋ ನ ತಮರ್ಥಮಾಹ ।
ಸ ವಾಗ್ವಜ್ರೋ ಯಜಮಾನಂ ಹಿನಸ್ತಿ ಯಥೇಂದ್ರಶತ್ರುಃ ಸ್ವರತೋಽಪರಾಧಾತ್ ॥
ಅನಕ್ಷರಂ ಹತಾಯುಷ್ಯಂ ವಿಸ್ವರಂ ವ್ಯಾಧಿಪೀಡಿತಮ್ ।
ಅಕ್ಷತಾ ಶಸ್ತ್ರರೂಪೇಣ ವಜ್ರಂ ಪತತಿ ಮಸ್ತಕೇ ॥ 53॥
ಹಸ್ತಹೀನಂ ತು ಯೋಽಧೀತೇ ಸ್ವರವರ್ಣವಿವರ್ಜಿತಮ್ ।
ಋಗ್ಯಜುಃಸಾಮಭಿರ್ದಗ್ಧೋ ವಿಯೋನಿಮಧಿಗಚ್ಛತಿ ॥ 54॥
ಹಸ್ತೇನ ವೇದಂ ಯೋಽಧೀತೇ ಸ್ವರವರ್ಣರ್ಥಸಂಯುತಮ್ ।
ಋಗ್ಯಜುಃಸಾಮಭಿಃ ಪೂತೋ ಬ್ರಹ್ಮಲೋಕೇ ಮಹೀಯತೇ ॥ 55॥
ಶಂಕರಃ ಶಾಂಕರೀಂ ಪ್ರಾದಾದ್ದಾಕ್ಷೀಪುತ್ರಾಯ ಧೀಮತೇ ।
ವಾಙ್ಮಯೇಭ್ಯಃ ಸಮಾಹೃತ್ಯ ದೇವೀಂ ವಾಚಮಿತಿ ಸ್ಥಿತಿಃ ॥ 56॥
ಯೇನಾಕ್ಷರಸಮಾಮ್ನಾಯಮಧಿಗಮ್ಯ ಮಹೇಶ್ವರಾತ್ ।
ಕೃತ್ಸ್ನಂ ವ್ಯಾಕರಣಂ ಪ್ರೋಕ್ತಂ ತಸ್ಮೈ ಪಾಣಿನಯೇ ನಮಃ ॥ 57॥
ಯೇನ ಧೌತಾ ಗಿರಃ ಪುಂಸಾಂ ವಿಮಲೈಃ ಶಬ್ದವಾರಿಭಿಃ ।
ತಮಶ್ಚಾಜ್ಞಾನಜಂ ಭಿನ್ನಂ ತಸ್ಮೈ ಪಾಣಿನಯೇ ನಮಃ ॥ 58॥
ಅಜ್ಞಾನಾಂಧಸ್ಯ ಲೋಕಸ್ಯ ಜ್ಞಾನಾಂಜನಶಲಾಕಯಾ ।
ಚಕ್ಷುರುನ್ಮೀಲಿತಂ ಯೇನ ತಸ್ಮೈ ಪಾಣಿನಯೇ ನಮಃ ॥ 59॥
ತ್ರಿನಯನಮಭಿಮುಖನಿಃಸೃತಾಮಿಮಾಂ ಯ ಇಹ ಪಠೇತ್ಪ್ರಯತಶ್ಚ ಸದಾ ದ್ವಿಜಃ ।
ಸ ಭವತಿ ಧನಧಾನ್ಯಪಶುಪುತ್ರಕೀರ್ತಿಮಾನ್ ಅತುಲಂ ಚ ಸುಖಂ ಸಮಶ್ನುತೇ ದಿವೀತಿ ದಿವೀತಿ ॥ 60॥
॥ ಇತಿ ವೇದಾಂಗನಾಸಿಕಾ ಅಥವಾ ಪಾಣಿನೀಯಶಿಕ್ಷಾ ಸಮಾಪ್ತಾ ॥
PAPU!
ಯದ್ದದಾಸಿ ವಿಶಿಷ್ಟೇಭ್ಯೋ ಯಚ್ಚಾಶ್ನಾಸಿ ದಿನೇ ದಿನೇ | ತತ್ತ ವಿತ್ತಮಹಂ ಮನ್ಯೇ ಶೇಷಮನ್ಯಸ್ಯ ರಕ್ಷಸಿ ||
Tuesday, August 25, 2026
ಪಾಣಿನೀಯ ಶಿಕ್ಷಾ
Wednesday, July 15, 2026
ಎಂಟು ಆತ್ಮಗುಣಗಳು
ದಯಾ ಕ್ಷಮಾನಸೂಯಾ ಚ
ಶೌಚಾನಾಯಾಸಮಂಗಲಮ್ |
ಅಕಾರ್ಪಣ್ಯಮಸ್ಪೃಹತ್ವಂ
ಸರ್ವಸಾಧಾರಣಾನಿ ಚ ||
1.
ದಯಾ – ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |
ವರ್ತತೇ ಸತತಂ ಹೃಷ್ಟಃ ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ ||
ತನ್ನಂತೆ ಎಲ್ಲರ ಹಿತವನ್ನೂ, ಶುಭವನ್ನೂ ಬಯಸುವವನಾಗಿದ್ದು, ಸದಾ ಸಂತುಷ್ಟನಾಗಿರುವ ಗುಣವಂತನೇ ದಯಾವಂತನಾಗಿದ್ದಾನೆ.
2.
ಕ್ಷಮಾ – ಆಕೃಷ್ಟೋಭಿಹತೋ ವಾಪಿ ನ ಕ್ರೋಶೇನ್ನ ಚ ತಾಡಯೇತ್ |
ಅದುಷ್ಟೋ ವಾಙ್ಮನಃ ಕಾಯೈಃ ಸಾ ತಿತಿಕ್ಷಾ ಕ್ಷಮಾ ಸ್ಮೃತಾ ||
ತನಗೆ ಪೆಟ್ಟು ಕೊಟ್ಟರೂ, ತನ್ನ ಕಷ್ಟಗಳಿಗೆ ಆತನೇ ಕಾರಣವೆಂಬುದು ತಿಳಿದರೂ, ಆತನ ಬಗ್ಗೆ ಮಾತಿನಿಂದ ಮತ್ತು ಶರೀರದಿಂದ ಹಿಂಸೆ ಕೊಡದೇ ಅದನ್ನು ನುಂಗಿ ಕೊಂಡು, ಪ್ರತಿಕ್ರಿಯಾ ಶೂನ್ಯನಾಗಿ ಬದುಕುವ ಸಹನಾ ಮೂರ್ತಿಯೇ ಕ್ಷಮಾವಂತನೆನಿಸುತ್ತಾನೆ.
3.
ಅನಸೂಯಾ – ಯೋ ಧರ್ಮಮರ್ಥಂ ಕಾಮಂ ಚ ಲಭತೇ ಮೋಕ್ಷಮೇವ ಚ |
ನ ದ್ವಿಷ್ಯಾತ್ತಂ ಸದಾ ಪ್ರಾಜ್ಞಃ ಸಾನಸೂಯಾ ಸ್ಮೃತಾ ಬುಧೈಃ ||
ಯಾರು ಧರ್ಮಾರ್ಥಕಾಮಮೋಕ್ಷಗಳನ್ನು ಪಡೆಯಲು ಉದ್ಯುಕ್ತರಾಗಿರುತ್ತಾರೋ, ಅವರು ಇನ್ನೊಬ್ಬರ ಪ್ರಯತ್ನವನ್ನು ನಿಂದಿಸಬಾರದು, ಪರರ ಏಳಿಗೆಯನ್ನು ದ್ವೇಷಿಸದೇ ಇರುವ ಗುಣವೇ ಅನಸೂಯಾ.
4.
ಶೌಚಮ್ – ದ್ರವ್ಯಶೌಚಂ ಮನಃ ಶೌಚಂ ವಾಚಿಕಂ ಕಾಯಿಕಂ ತಥಾ |
ಶೌಚಂ ಚತುರ್ವಿಧಂ ಪ್ರೋಕ್ತಂ ಋಷಿಭಿಸ್ತತ್ವದರ್ಶಿಭಿಃ ||
ಶೌಚವೆಂದರೆ ಶುದ್ಧಿ. ದ್ರವ್ಯ, ಮನಸ್ಸು, ಮಾತು ಮತ್ತು ಶರೀರ ಇವುಗಳ ಶುದ್ಧತೆ ಮತ್ತು ಬದ್ಧತೆಯ ಸಂಪಾದನೆ ಬಹು ಮುಖ್ಯವಾಗಿದ್ದು, ಅದನ್ನು ಸಾಧಿಸಲು ಈ ಗುಣವನ್ನು ಎತ್ತಿ ಹೇಳಿದ್ದಾರೆ.
5. ಅನಾಯಾಸಃ – ಯದಾರಂಭೇ ಭವೇತ್ಪೀಡಾ ನಿತ್ಯಮತ್ಯಂತಮಾತ್ಮನಃ |
ತದ್ವರ್ಜಯೇದ್ಧರ್ಮ್ಯಮಪಿ ಸೋನಾಯಾಸಃ ಪ್ರಕೀರ್ತಿತಃ ||
ಯಾವುದನ್ನು ಮಾಡುವುದರಿಂದ ಶರೀರ, ಬುದ್ಧಿ, ಮನಸ್ಸುಗಳಿಗೆ ಪೀಡೆಯುಂಟಾಗುವುದೋ, ಈ ಪೀಡೆ ನಿರಂತರವಾಗಿ ನಮ್ಮನ್ನು ಕಾಡಲಾರಂಭಿಸಿ, ನಾವು ಬಾಡದಂತೆ, ಶರೀರಾದಿಗಳನ್ನು ಅತಿಯಾಗಿ ಪೀಡಿಸದೇ ಶಿಸ್ತಿನಿಂದಿರುವುದು.
6. ಮಂಗಲಮ್ – ಪ್ರಶಸ್ತಾಚರಣಂ ನಿತ್ಯಮಪ್ರಶಸ್ತವಿವರ್ಜನಮ್ |
ಏತದ್ಧಿ ಮಂಗಲಂ ಪ್ರೋಕ್ತಂ ಮುನಿಭಿಸ್ತತ್ವದರ್ಶಿಭಿಃ ||
ವಿಹಿತವಾದದ್ದನ್ನು ಮಾಡುವುದು, ಕೆಟ್ಟದ್ದನ್ನು ಬಿಡುವುದು ಹೀಗೆ ಪ್ರಶಸ್ತಕರ್ಮದಲ್ಲಿ ನಿರತನಾಗಿರುವುದೇ ಮಂಗಲ ಅಥವಾ ಶುಭಾಚರಣೆ ಎಂದೆನಿಸುತ್ತದೆ. ಅಂದರೆ ಕೇಡನ್ನು ಬಿಟ್ಟು ಒಳಿತಿನಿಂದ ಕೂಡಿದ ಆಚರಣೆ ಮಾಡುವುದು.
7. ಅಕಾರ್ಪಣ್ಯಮ್ – ಆಪದ್ಯಪಿ ಚ ಕಷ್ಟಾಯಾಂ ಭವೇದ್ದೀನೋ ನ ಕಸ್ಯಚಿತ್ |
ಸಂವಿಭಾಗರುಚಿಶ್ಚ ಸ್ಯಾತ್ತದಕಾರ್ಪಣ್ಯಮುಚ್ಯತೇ ||
ಎಂಥಾ ಆಪತ್ತು ಎದುರಾದರೂ ಬೇರೆಯವರಲ್ಲಿ ಬೇಡುವುದನ್ನು ಬಿಟ್ಟು, ಹಂಚಿಕೊಂಡು
ಬಾಳುವುದರಲ್ಲಿ ವಿಶ್ವಾಸವಿಟ್ಟು, ಮನಃಪೂರ್ವಕವಾಗಿ ವಿತರಣಾ ಬುದ್ಧಿಯನ್ನು ಹೊಂದುವುದು..
8. ಅಸ್ಪೃಹಾ – ವಿವರ್ಜಯೇದಸಂತೋಷಂ ವಿಷಯೇಷು ಸದಾ ನರಃ |
ಪರದ್ರವ್ಯಾಭಿಲಾಷಂ ಚ ಸಾಸ್ಪೃಹಾ ಕಥ್ಯತೇ ಬುಧೈಃ ||
ಅಸಮಾಧಾನವನ್ನು ಬಿಟ್ಟು, ಪರರ ವಸ್ತುವಿಗೆ ಆಸೆಪಡದೆ, ಇಂದ್ರಿಯಗಳನ್ನು ನಿಗ್ರಹಿಸಿ, ತೃಪ್ತಿಯಿಂದಿರುವುದನ್ನೇ ಅಸ್ಪೃಹಾ ಎನ್ನುವರು.
ಈ ಎಂಟು ಆತ್ಮಗುಣಗಳನ್ನು ಗೌತಮರು ಎತ್ತಿ ಹೇಳಿದ್ದಾರೆ. ಅತೀ ಮುಖ್ಯ ವಿಷಯವೇನೆಂದರೆ, ವೇದೋಕ್ತ ಸಂಸ್ಕಾರಗಳನ್ನು ಮಾಡಿಯೂ
ವ್ಯಕ್ತಿಯಲ್ಲಿ ಮೇಲಿನ ಎಂಟು ಗುಣಗಳು ಪ್ರಕಟವಾಗದಿದ್ದರೆ ಆ ಸಂಸ್ಕಾರಗಳು ವ್ಯರ್ಥವೆಂದೇ
ತಿಳಿಯಬೇಕು. ಒಂದು ವೇಳೆ ಸಂಸ್ಕಾರಗಳಲ್ಲಿ ಕೆಲವನ್ನು ಮಾತ್ರ ಮಾಡಿದ್ದರೂ, ಈ ಗುಣಗಳು ವ್ಯಕ್ತಿಯ
ವ್ಯಕ್ತಿತ್ವದಲ್ಲಿ ಕಂಡು ಬಂದರೆ ಆತನು ಪೂರ್ಣವಾಗಿ ಸುಸಂಸ್ಕೃತನೆಂದು ತಿಳಿಯಬೇಕು. ಹೀಗೆ ತಾಳೆಯನ್ನು
ನೋಡಬೇಕೆಂದು ಋಷಿಗಳು ಒತ್ತಿ ಹೇಳಿದ್ದಾರೆ. ಸಮಾಜದ ಯಾವುದೇ ಕ್ರಿಯಾ ಕಲಾಪಗಳು ವ್ಯರ್ಥವಾಗಿಯೂ,
ಬೂಟಾಟಿಕೆಯಾಗಿಯೂ ಆಗಿರುವುದು ಹಿರಿಯರಿಗೆ ಇಷ್ಟವಾಗಿರಲಿಲ್ಲ!
ಯಸ್ಯ ಖಲು ಸಂಸ್ಕಾರಾಣಾಂ ಏಕದೇಶೋಪಿ ಅಷ್ಟೌ
ಆತ್ಮಗುಣಾಃ ಅಥ ಸ ಬ್ರಹ್ಮಣಃ ಸಾಯುಜ್ಯಂ ಸಾಲೋಕ್ಯಂ ಚ ಗಚ್ಚತಿ ||
Tuesday, June 16, 2026
ಸ್ವಾಹೇತ್ಯಾದಿ ಸಂತತಧಾರಯೇತಿ ಮೀಮಾಂಸಕಾಃ
ವಸೋರ್ಧಾರಾ ಕುರಿತ ವಿಷಯವನ್ನು ಪೂರ್ವ ಮೀಮಾಂಸೆಯ ೧೨ನೇ ಅಧ್ಯಾಯದ ೩ನೇ ಪಾದ ೧೧ನೇ ಅಧಿಕರಣದಲ್ಲಿ ಕಾಣಬಹುದು.
೧೦ನೇ ಅಧಿಕರಣದಲ್ಲಿ ಮಂತ್ರಾಂತೇನ ಕರ್ಮಾದಿ ಸನ್ನಿಪಾತಸ್ಸ್ಯಾತ್ ಎಂದು ವಿವರಿಸುವಾಗ ಮಂತ್ರದ ಕೊನೆಯ ಶಬ್ದ ಹೇಳಿ ಮುಗಿಯದೇ ಆ ಮಂತ್ರ ಅರ್ಥವಾಗಲಾರದಷ್ಟೇ? ಹಾಗಾಗಿ ಮಂತ್ರಾದಿ ಮತ್ತು ಮಂತ್ರಮಧ್ಯಗಳಲ್ಲಿ ಕರ್ಮವನ್ನು ಕೈಗೊಳ್ಳದೇ ಮಂತ್ರದ ಅಂತ್ಯದಲ್ಲಿ ಕರ್ಮವನ್ನು ಆಚರಿಸುವಂತೆ ಸಿದ್ಧಾಂತಿಸಲಾಗಿದೆ.
ಇದನ್ನು ಪ್ರಶ್ನಿಸಿ ೧೨ನೇ ಅಧಿಕರಣದಲ್ಲಿ ವೈಷಮ್ಯವನ್ನು ತೋರಿಸುತ್ತಾ ಸಂತತಾಂ ವಸೋರ್ಧಾರಾಂ ಜುಹೋತಿ ಅಥವಾ ದ್ವಾದಶದ್ವಾದಶಾನಿ ಜುಹೋತಿ ಎಂಬಲ್ಲಿ ಅವಿಚ್ಛಿನ್ನಧಾರೆ ಅಥವಾ ಸಾಂತತ್ಯ ವಿಹಿತವಾಗಿದೆ. ಮಂತ್ರಾದಿಯಲ್ಲಿ ಮಂತ್ರ ಮತ್ತು ಕರ್ಮಗಳ ಸಾಹಿತ್ಯ ಸ್ಪಷ್ಟ ಎಂದು ಪೂರ್ವಪಕ್ಷ ಮಾಡಿದ್ದಾರೆ. ವಿಚಿತ್ರವೆಂಬಂತೆ ಸಂತತವಚನಾದ್ಧಾರಾಯಾಮಾದಿ ಸಂಯೋಗಃ ಎಂಬುದು ಪೂರ್ವ ಪಕ್ಷವಾಗಿ ಸೂತ್ರಿತವಾಗಿದೆ.
ಕರ್ಮಸಂತಾನೋ ವಾ ನಾನಾಕರ್ಮತ್ವಾದಿತರಸ್ಯಾಶಕ್ಯತ್ವಾತ್ ಎಂಬುದು ಸಿದ್ಧಾಂತ. ಇಲ್ಲಿ ಹನ್ನೆರಡೂ ಹೋಮಗಳ ಸಾಂತತ್ಯ ಹೇಳಲ್ಪಟ್ಟಿದ್ದು, ಮಂತ್ರಕರ್ಮಗಳ ಸಾಂತತ್ಯವಲ್ಲ! ಕ್ಷಣಿಕ ಕರ್ಮವು ಮಂತ್ರದ ಜೊತೆ ಸಾಗಲಾರದು! ಮಂತ್ರಕರ್ಮಸಾಂತತ್ಯಸ್ಯ ಅಶಕ್ಯತ್ವಾತ್ ಎಂದು ಪ್ರತಿಪಾದಿಸಿದ್ದಾರೆ.
ಹಾಗಾದರೆ ಆಘಾರಹೋಮದಲ್ಲಿ ಕರ್ಮ ಮತ್ತು ಮಂತ್ರಗಳ ಸಂಯೋಗ ಕಾಣಿಸುತ್ತಿದೆಯಲ್ಲ!? ಎಂಬುದು ಮುಂದಿನ ಅಧಿಕರಣದ ವಿಶಯವಾಗಿದೆ. ಆಘಾರೇ ಚ ದೀರ್ಘ ಧಾರಾತ್ವಾತ್ ಆಘಾರದಲ್ಲಿ ಧಾರಾ ಹೋಮ ಮಾತ್ರ ಗ್ರಾಹ್ಯ ವಾಗಿದೆ. ಇಲ್ಲಿಯೂ ಕರ್ಮಸಾಂತತ್ಯ ಮುಖ್ಯವಾಗುವುದಿಲ್ಲ! ಎಂದು ಸಿದ್ಧಾಂತ ಮಾಡಿದ್ದಾರೆ...
ನೋಡುತ್ತಾ ನೋಡುತ್ತಾ ಮೂರು ಅಧಿಕರಣಗಳನ್ನು ಚರ್ಚಿಸಿದಂತೆ ಆಯಿತು... ಇದೆಲ್ಲದರಿಂದ ಮೀಮಾಂಸಕರ ಅಭಿಪ್ರಾಯ ಸುಸ್ಪಷ್ಟವಾಗಿ ಗೋಚರಿಸುತ್ತದೆ. ಮಂತ್ರ ಮತ್ತು ಆಜ್ಯಧಾರೆ ಏಕಕಾಲದಲ್ಲಿ ಆರಂಭವಾಗಲಾರದು. ಪ್ರತೀಮಂತ್ರವನ್ನೂ ಪಠಿಸಿ ಆದಮೇಲೆ ಕರ್ಮದ ವಿನಿಯೋಗ ಯುಕ್ತವಾಗಿದೆ. ಎಲ್ಲಿ ಧಾರೆ ಅಪೇಕ್ಷಿತವೋ, ಅಲ್ಲಿ ಚತುರ್ಗೃಹೀತ ಮಾಡಿ ಹೋಮಿಸುವುದು ಸರಿಯಾದ ಕ್ರಮವೇ ಹೊರತು ಮಂತ್ರಾರಂಭದಿಂದ ಧಾರೆಯನ್ನು ಮೀಮಾಂಸಾ ಸುತರಾಂ ಒಪ್ಪುವುದಿಲ್ಲ! ಧನ್ಯವಾದಗಳುWednesday, April 15, 2026
ಸಂಗೀತ
ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ | ಏಕಮಾಪಾತಮಧುರಂ - ಅನ್ಯದಾಲೋಚನಾಮೃತಮ್ || ಸುಭಾಷಿತಮ್ ||
ಸಂಗೀತವೆಂದರೆ ಚೆನ್ನಾಗಿ ಹಾಡುವುದು. ಇದರಲ್ಲಿ ಗಾಯನ, ವಾದನ ಮತ್ತು ನರ್ತನ ಎಂಬ ಮೂರು ಅಂಶಗಳು ಮೇಳೈಸಿವೆ. ಹಾಗಾಗಿ ಸಂಗೀತವನ್ನು ತ್ರಿತಯ ಎಂದೂ ಕರೆಯುತ್ತಾರೆ. ಇವು ಮೂರೂ ಪ್ರಕಾರಗಳು (ಹಾಡು, ವಾದ್ಯ ಮತ್ತು ನೃತ್ಯ) ಬೇರೆ ಬೇರೆಯಾಗಿ ಸ್ವತಂತ್ರವೋ ಎಂಬಂತೆ ಇಂದು ಬೆಳೆದು ನಿಂತಿವೆ. ಅದರಂತೆ ಇವು ಪರಸ್ಪರ ಗಾಢವಾಗಿ ಬೆಸೆದು ಕೊಂಡಿವೆ. ಆದರೆ ಇಂದು ಸಂಗೀತ ಶಬ್ದ ಗಾಯನಕ್ಕೆ ಮಾತ್ರ ಸೀಮಿತವಾಗಿ ಬಳಕೆಯಾಗುತ್ತಿದೆ. ಪ್ರಕೃತ ಲೇಖನದಲ್ಲಿ ಸಂಗೀತ ಪದ ತ್ರಿತಯವನ್ನೂ ಪ್ರತಿನಿಧಿಸುತ್ತದೆ. ಗೀತ, ವಾದ್ಯ ಮತ್ತು ನೃತ್ಯಗಳಲ್ಲಿ (ಸಂಗೀತದಲ್ಲಿ) ನಾದ ಮತ್ತು ಲಯಗಳೆಂಬ ಎರಡು ಅಂಶಗಳು; ಇಡೀ ಸಂಗೀತದ ತ್ರಿತಯಗಳನ್ನು ಪರಸ್ಪರ ಒಂದನ್ನೊಂದು ಬೆಸೆದು ಕೊಳ್ಳಲು ಮತ್ತು ರೂಪುಗೊಳ್ಳಲು ಸಹಕಾರಿಯಾಗಿ ನಿಂತಿವೆ. ಇವು ಸಂಗೀತ ಪ್ರಪಂಚದುದ್ದಕ್ಕೂ ಹಾಸುಹೊಕ್ಕಾಗಿವೆ.


ಈ ಗಂಧರ್ವ ವೇದದಲ್ಲಿ ನೃತ್ಯ ಹಾಗೂ ಗಾಯನಕ್ಕೆ ಸಂಬಂಧಿಸಿದ ಹಲವು ಪ್ರಾಚೀನ ವಿಷಯಗಳನ್ನು ನಾವು ನೋಡಬಹುದು. ರಾಗ, ರಾಗಿಣೀ, ತಾಳ, ಸ್ವರ, ವಾದ್ಯಗಳು ಮತ್ತು ನೃತ್ಯಗಳ ಭೇದೋಪಭೇದಗಳ ವರ್ಣನೆಗಳು ಇಲ್ಲಿವೆ. ಇನ್ನು ಸಾಮಗಾನದ ಗೇಯಪ್ರಕಾರಗಳು ಮತ್ತು ಶಾಖೋಪಶಾಖೆಗಳು ಇಂದಿಗೆ ಸರಿಸುಮಾರು ಲುಪ್ತವಾಗಿಹೋಗಿವೆ. ಆದರೂ ಪ್ರಾಚೀನ ನೃತ್ಯಶಾಸ್ತ್ರಗಳಲ್ಲಿ ಭರತನ ನಾಟ್ಯಶಾಸ್ತ್ರ, ದತ್ತಿಲಮುನಿಯ ದತ್ತಿಲಮ್, ಶಾರ್ಙದೇವನ ಸಂಗೀತ ರತ್ನಾಕರ ಮತ್ತು ದಾಮೋದರನ ಸಂಗೀತ ದರ್ಪಣ ಗ್ರಂಥಗಳು ಇಂದಿಗೂ ಆಧಾರವಾಗಿದ್ದು, ನಾಟ್ಯದ ವಿವಿಧರೂಪಗಳು, ರಸಭಾವಗಳು, ಸ್ವರ, ತಾಳ, ಲಯಗಳ ವಿಸ್ತೃತ ವರ್ಣನೆಗಳನ್ನು ನಾವಿಲ್ಲಿ ಗಮನಿಸಬಹುದು. ಒಟ್ಟಿನಲ್ಲಿ ಸಾಮವೇದದ ಉಪವೇದವಾದ ಗಂಧರ್ವವೇದದಲ್ಲಿ ಈ ಸಂಗೀತದ ಕುರಿತ ಮೂಲಭೂತವಾದ ವಿಚಾರಗಳು ಮೊದಲು ಬೆಳಕಿಗೆ ಬಂದವು.

ಳೆಂದು ಕೊಂಡಾಡಿದ್ದಾರೆ. ಒಂದು ಎದೆಯಲ್ಲಿ ಸಂಗೀತವನ್ನೂ, ಇನ್ನೊಂದರಲ್ಲಿ ವೇದವಾಙ್ಮಯವನ್ನೂ ಅಂದರೆ ಸಾಹಿತ್ಯವನ್ನೂ ತುಂಬಿಕೊಂಡಿದ್ದಾಳೆ. ಇದರಿಂದ ಭಾರತೀಯರಿಗೆ ಅಮೃತವನ್ನುಣಿಸಿದ್ದಾಳೆ. ಸಂಗೀತಾಮೃತದಿಂದ ರಸ ಮಾಧುರ್ಯವನ್ನೂ, ಸಾಹಿತ್ಯಾಮೃತದಿಂದ ವಿಚಾರ ವೈಶಾಲ್ಯವನ್ನೂ (ನಾವು ಸಣ್ಣವರಿದ್ದಾಗಲೇ) ನಮಗೆ ನೀಡಿ, ನಮ್ಮ ಮನೋ ವೇದಿಕೆಗಳಾದ ಭಾವ ಮತ್ತು ಬುದ್ಧಿಗಳನ್ನು ವಿಕಾಸಗೊಳಿಸಿದ್ದಾಳೆ. ಅದಕ್ಕೆ ಭಾರತೀಯರಾದ ನಾವು ಧನ್ಯರು. ಭಾವ ಮತ್ತು ಬುದ್ಧಿ ಪ್ರಪಂಚದಲ್ಲಿನ ದಕ್ಷತೆಯೇ ಬದುಕಿನ ಬಹುದೊಡ್ಡ ಸಾಧನೆಯಲ್ಲವೇ?
Saturday, August 02, 2025
ವಿಸ್ತರೋ ಹಂತಿ
ಸತ್ಕ್ರಿಯಾಂ ದೇಶಕಾಲೌ ಚ
ಶೌಚಂ ಬ್ರಾಹ್ಮಣಸಂಪದಮ್ |
ಪಂಚೈತಾನ್ ವಿಸ್ತರೋ ಹಂತಿ
ತಸ್ಮಾನ್ನೇಹೇತ ವಿಸ್ತರಮ್ || ಬೌಧಾಯನ ಧರ್ಮ ಸೂತ್ರ...
ಯಾವುದೇ ಶ್ರಾದ್ಧಾದಿ ಪುಣ್ಯ ಕರ್ಮಗಳನ್ನು ಮಾಡುವಾಗ ಅಥವಾ ವೈದಿಕ ಕರ್ಮ ನಿರ್ವಹಿಸುವಾಗ ಈ ಐದು ವಿಷಯಗಳನ್ನು ಸುಮ್ಮನೆ ವಿಸ್ತರಿಸಬಾರದು.
೧) ಆಚರಣೆ ಮತ್ತು ಕ್ರಿಯಾ ಕಲಾಪವನ್ನು ಅನ್ಯಥಾ ಬೆಳೆಸಬಾರದು. ಸರಿಯಾದ ಕರ್ಮ (ಯಾವದುಕ್ತಂ ಕರ್ಮ) ಅನುಷ್ಠಾನಕ್ಕೆ ಬರಬೇಕು.
೨) ಯಾವ ಸ್ಥಾನದಲ್ಲಿ ಕರ್ಮ ನಿರ್ವಹಿಸಬೇಕು? ಎಂಬ ದೇಶದ (ಜಾಗದ) ಬಗೆಗಿನ ಅತಿಯಾದ ಆಕರ್ಷಣೆ (ಮೋಹ) ಒಳ್ಳೆಯದಲ್ಲ! ಯಥಾ ಯೋಗ್ಯ ಸ್ಥಾನದಲ್ಲಿ ಕರ್ಮ ನಿರ್ವಹಣೆಯಾಗಬೇಕು. ಅಷ್ಟೇ!
೩) ಆಯಾ ಕರ್ಮಕ್ಕೆ ಪ್ರಶಸ್ತ ಕಾಲವನ್ನು ಆಯ್ಕೆ ಮಾಡಬೇಕು. ಆದರೆ ಕರ್ಮಕ್ಕಿಂತ ಕಾಲದ ವಿಷಯವೇ ಮುಖ್ಯವೆನ್ನುವಂತೆ ಆಗಬಾರದು. ಕಾಲವನ್ನು ಆರಿಸುವ ಗಡಿಬಿಡಿಯಲ್ಲಿ ಕರ್ಮದ ಆಚರಣೆ ಮೊಟಕು ಗೊಳ್ಳಬಾರದು.
೪) ಶುದ್ಧವಾಗಿ ಕರ್ಮ ಮಾಡಬೇಕು. ಆದರೆ ಅತಿಯಾಗಿ ಪರರನ್ನು ನಿಂದಿಸುವ (ನೋಯಿಸುವ) ಹಂತದಲ್ಲಿ ಮಡಿವಂತಿಕೆಯನ್ನು ಬೆಳೆಸಬಾರದು. ಸ್ಪೃಷ್ಟಾಸ್ಪೃಷ್ಟ, ಮೈಲಿಗೆ ಮತ್ತು ಜಾತಿ ವಿಷಯಗಳನ್ನು ಕರ್ಮದ ನಡುವೆ ಚರ್ಚಿಸಿ ಬೆಳೆಸಬಾರದು.
೫) ಬ್ರಾಹ್ಮಣ ಸಂಖ್ಯೆಗೆ ಹೆಚ್ಚು ಒತ್ತು ನೀಡಿ, ೧೨, ೧೪, ೨೪.... ಹೀಗೆ ಅಂಕೆಗಳ ಹೆಚ್ಚಳ ಅಥವಾ ಸಂಖ್ಯಾಬಲವೇ ಹೆಚ್ಚುಗಾರಿಕೆಯಾಗಬಾರದು. ಸಂದರ್ಭಕ್ಕೆ ಸರಿಯಾಗಿ ಬ್ರಾಹ್ಮಣ ಸಂಖ್ಯೆಯಿರಬೇಕು.
ಹೀಗೆ ಸಹಜ ಶೈಲಿಯ ಕಾರ್ಯಕ್ರಮ ಶ್ರೇಯಃಪ್ರದವಾಗುತ್ತದೆ. ಅದನ್ನು ಬಿಟ್ಟು ಮೇಲಿನ ಐದು ವಿಷಯಗಳ ವಿಸ್ತರಣೆ ಸರ್ವಥಾ ಯೋಗ್ಯವಲ್ಲ! ಅದು ಮಾಡುವವನಿಗೆ (ಕರ್ತೃವಿಗೆ) ಒಳ್ಳೆಯದನ್ನು ಮಾಡುವುದಿಲ್ಲ!
Saturday, January 11, 2025
ಶ್ರೀರಾಮನ ಆದರ್ಶಗುಣಗಳ ವ್ಯಾಪ್ತಿ ಮತ್ತು ಎತ್ತರ
ಬಾಲಕ್ರೀಡನಮಿಂದುಶೇಖರಧನುರ್ಭಂಗಾವಧಿ ಪ್ರಹ್ವತಾ |
ತಾತೇ ಕಾನನಸೇವನಾವಧಿ ದಯಾ ಸುಗ್ರೀವಸಖ್ಯಾವಧಿ ||
ಆಜ್ಞಾ ವಾರಿಧಿಬಂಧನಾವಧಿ ಯಶೋ ಲಂಕೇಶನಾಶಾವಧಿ |
ಶ್ರೀರಾಮಸ್ಯ ಪುನಾತು ಲೋಕವಶತಾ ಜಾನಕ್ಯುಪೇಕ್ಷಾವಧಿ ||
(ಅಜ್ಞಾತ ಕರ್ತೃಕನ ಸಂಸ್ಕೃತ ಸಾಹಿತ್ಯದ ಸಾಲುಗಳು) ||
ಶ್ರೀರಾಮನ ವ್ಯಕ್ತಿತ್ವ, ಯುಗಯುಗಗಳೇ ಕಳೆದರೂ ಯಾರೂ ತಲುಪಲಾರದ ಎತ್ತರವನ್ನು ಹೇಗೆ ತಲುಪಿವೆ? ಎಂಬುದನ್ನು ಕವಿ ಸುಂದರವಾಗಿ ಸೂಕ್ಷ್ಮವಾಗಿ ಸೂಚಿಸಿದ್ದಾನೆ.
೧) ಬಾಲ್ಯದ ಹುಡುಗಾಟಿಕೆ - ಶಿವ ಧನುಸ್ಸನ್ನು ಮುರಿಯುವವರೆಗೆ...
೨) ಪ್ರೌಢಿಮೆ (ಪ್ರಾಯ ಸಂದರ್ಭ) - ತಂದೆಯ ಮಾತಿಗೆ ರಾಜ್ಯ ಬಿಟ್ಟು, ಕಾಡಿಗೆ ಹೋಗುವವರೆಗೆ...
೩) ಸ್ನೇಹ (ದಯೆ) - ಸುಗ್ರೀವನ ಸಖ್ಯ ಸಂಪಾದಿಸುವವರೆಗೆ...
೪) ಆಜ್ಞೆ (ಕೆಲಸವನ್ನು ಪೂರೈಸಬೇಕೆಂಬ ಹಟ (ಛಲ)) - ಸಮುದ್ರಕ್ಕೆ ಸೇತುವೆ ಕಟ್ಟುವವರೆಗೆ...
೫) ಯಶಸ್ಸು (ಕೀರ್ತಿ) - ಲಂಕಾಧಿಪತಿಯಾದ ದಶಕಂಠನ ಸೆದೆಬಡಿಯುವವರೆಗೆ...
೬) ಜನಾನುರಾಗ (ಪ್ರಜಾ ಪ್ರೇಮ) - ಮಡದಿ ಜಾನಕಿಯನ್ನು ಕಾಡಿಗೆ ಬಿಡುವವರೆಗೆ...
ಹೀಗೆ ಹಲವು ಹತ್ತು ವಿಷಯಗಳಲ್ಲಿ ಆಕಾಶದಷ್ಟು ಎತ್ತರಕ್ಕೆ ತಲುಪಿದ ಶ್ರೀರಾಮನ ಆದರ್ಶಗುಣಗಳು ನಮ್ಮನ್ನು ಕಾಪಾಡಲಿ.
ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾದ ಮೊದಲವರ್ಷದ ಸವಿನೆನಪಿಗೆ ಈ ನುಡಿನಮನಗಳು.
ವಂದನೆಗಳೊಂದಿಗೆ ಪರಮೇಶ್ವರ ಪುಟ್ಟನಮನೆ
Thursday, January 09, 2025
ಪರಾಶರರ ವಿಚಾರ
ಪರಾಶರರ
ವಿಚಾರವನ್ನು ತಳ್ಳಿಹಾಕಿದ್ದಾರಾ!? ಯದ್ಯಪಿ ಕಲಿ
ಧರ್ಮವನ್ನೇ ಹೇಳಲು ಉಪಕ್ರಮಿಸಿದ ಪರಾಶರರ ಮಾತನ್ನು ಈ ಸಂಪ್ರದಾಯವಾದಿಗಳು ಗೌರವದಿಂದ ಹೇಗೆ
ಅಲ್ಲಗಳೆದಿದ್ದಾರೆ? ಎಂಬುದನ್ನು
ಗಮನಿಸಿದರೆ, ಪರಾಶರರ ವಿಚಾರಕ್ಕೆ
ಹಿಂದಿನ ಜನರೇ ಅನ್ಯಾಯವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ನಷ್ಟೇ ಮೃತೇ
ಪ್ರವ್ರಜಿತೇ
ಕ್ಲೀಬೇ ಚ ಪತಿತೇ
ಪತೌ |
ಪಂಚಸ್ವಾಪತ್ಸು
ನಾರೀಣಾಂ
ಪತಿರನ್ಯೋ ವಿಧೀಯತೇ
||
ಆಪತ್ತಿನ
ಸಂದರ್ಭದಲ್ಲಿ ಮಹಿಳೆಗಾದ ಅನ್ಯಾಯವನ್ನು ಸರಿಪಡಿಸುವ ಮಹತ್ತರ ಹೆಜ್ಜೆಯನ್ನಿಟ್ಟ, ದಿಟ್ಟ ಮತ್ತು ಕರುಣಾಳುಗಳಾದ ಪರಾಶರರು ಈ ಐದು
ಸಂದರ್ಭಗಳಲ್ಲಿ ಸ್ತ್ರೀಯರಿಗೆ ಪುನರ್ವಿವಾಹವನ್ನು ಪ್ರತಿಪ್ರಸವ ಮಾಡಿರುತ್ತಾರೆ. ಇಂಥ
ಸಂದರ್ಭದಲ್ಲಿ ಪುನರ್ವಿವಾಹ ದೋಷವಲ್ಲ! ಎಂಬುದಷ್ಟೇ ಅವರ ವಿಚಾರವಾಗಿದೆ. ಹೊರತು... ಪುನರ್ವಿವಾಹ
ಅನಿವಾರ್ಯ ಎಂಬುದಾಗಲೀ, ಅದು ಕಲಿಧರ್ಮ
ಎಂಬುದಾಗಲೀ ಅವರ ತಾತ್ಪರ್ಯ ಅಲ್ಲ! ಹೀಗಿರುವಾಗ ಇದನ್ನು ಯುಗಾಂತರ ವಿಷಯ ಎಂದು ತಳ್ಳಿಹಾಕಲು
ಕಾರಣವೇನು? ಅಲ್ಲದೇ ಇದನ್ನು
ಸಪ್ತಪದ ಕ್ರಮಣಕ್ಕೆ ಮುಂಚಿತವಾಗಿ ಅನುಸರಿಸಬೇಕಾದ್ದು, ತದನಂತರದಲ್ಲಿ ಈ ಮಾತಿಗೆ ಅರ್ಥವಿಲ್ಲ! ಎಂದು ಹೇಳಿ
ಸೀಮಿತ ವ್ಯವಸ್ಥೆಗೆ ಅಣಿಗೊಳಿಸಲು ಕಾರಣವೇನು? ಎಂಬುದು ಅರ್ಥವಾಗುತ್ತಿಲ್ಲ! ಹಾಗಂತ ಧರ್ಮಶಾಸ್ತ್ರ ನಿಬಂಧಕಾರರೂ ಕೂಡ ಸಂಪ್ರದಾಯ
ಪ್ರವರ್ತಕರೂ, ಜನಾನುರಾಗಿಗಳೂ,
ಧರ್ಮ ಮಾರ್ಗ ಪೋಷಕರೂ,
ಕರುಣಾಳುಗಳೂ ಆಗಿದ್ದಾರೆ.
ಹೀಗಿರುವಾಗ ಋಷಿವಚನಕ್ಕೂ ಋಷಿಸದೃಶರ (ಸಂಪ್ರದಾಯ ವಾದಿಗಳ, ನಿಬಂಧ ಕಾರರ) ವಚನಕ್ಕೂ ವಿರೋಧ ಬಂದಾಗ ಯಾವುದು
ಗ್ರಾಹ್ಯ? ಎಂಬುದನ್ನು ಪ್ರಸ್ತುತ ನಾವು ವಿಮರ್ಶಿಸಬೇಕಾಗಿದೆ...
Sunday, September 08, 2024
'ಗಣಪತಿ ಮತ್ತು ಸಂಕಷ್ಟ ಚತುರ್ಥೀ ವ್ರತ'.
ಮನುಷ್ಯ ಸದಾ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಅದಕ್ಕೆ ಆತ
ಮಾಡದ ಕೆಲಸವಿಲ್ಲ! ಓಡದ ಸ್ಥಳವಿಲ್ಲ! ಒಂದಿಲ್ಲೊಂದು
ರೀತಿಯಲ್ಲಿ ಸಂತಸದ ಸತತಾನ್ವೇಷಿಯಾಗಿ ಸಾಗುವ ಮನುಷ್ಯ; ಕಡೆಯಲ್ಲಿ ಪಡೆಯುವುದೇನು? ಎಂಬುದು ಯಕ್ಷಪ್ರಶ್ನೆಯಾಗಿ
ಜೀವಿತದ ಕೊನೆಗೆ ಕಾಡುತ್ತಿರುತ್ತದೆ. ಇದಕ್ಕೆ ಉತ್ತರವಾಗಿ ಋಷಿಗಳು ಕಂಡುಕೊಂಡಿದ್ದು, ಶುಭಸ್ಮರಣೆಯೇ
ಜೀವನದುದ್ದಕ್ಕೂ ಬರುವಂತಾಗಬೇಕು. ಅದಕ್ಕೆ ದೇವನು ವೇದಿಕೆಯನ್ನುಂಟು ಮಾಡಿಕೊಡಬೇಕು… ಎಂದು ಬೇಡಿಕೊಂಡರು…
“ ಸ ನೋ ದೇವಶ್ಶುಭಯಾ
ಸ್ಮೃತ್ಯಾ ಸಂಯುನಕ್ತು “ ಈ ಸಂಯೋಗ ವೇದಿಕೆಯಲ್ಲಿ ಜೀವ ದೇವರ ಸಂಯೋಗ ಸಾಂದರ್ಭಿಕವಾಗಿ ಏರ್ಪಡಬೇಕು... ಈ ಸಂಯೋಗಕ್ಕೆ
ಅಥವಾ ಈ ಸಂತೋಷಕ್ಕೆ ಮನುಷ್ಯ ಸದಾ ಆತುರನಾಗಿದ್ದಾನೆ. ಅದಕ್ಕೆಂದೇ ಮಹಾಕವಿ ಕಾಳಿದಾಸ ’ಉತ್ಸವಪ್ರಿಯಾಃ ಖಲು ಮನುಷ್ಯಾಃ!’ ಎಂದು ಹೇಳಿರುವುದು.
ಉತ್ಸವ ಎಂದರೆ ಹಬ್ಬ ಎಂದರ್ಥ. ಈ ಹಬ್ಬ ಹರಿದಿನಗಳು ಸನಾತನಿಗಳಲ್ಲಿರುವಷ್ಟು ಮತ್ತೆ ಯಾರಲ್ಲೂ ನಾವು
ಈ ಪ್ರಮಾಣದಲ್ಲಿ ಕಾಣಲಾರೆವು! ಎಂದು ಅಂದುಕೊಳ್ಳುತ್ತೇನೆ. ಅದಕ್ಕೆ ಮೂಲ ಕಾರಣ ಶುಭಸ್ಮರಣೆಗಳಿಂದ ಮನಸ್ಸನ್ನು
ಉದ್ಧರಿಸಿ ಕೊಳ್ಳುವುದೇ ಆಗಿದೆ. ಅದನ್ನೇ ಡಿ. ವಿ. ಗುಂಡಪ್ಪನವರು ತಮ್ಮ ಮುಕ್ತಕವೊಂದರಲ್ಲಿ ಹೀಗೆ
ಹೇಳಿದ್ದಾರೆ.
ದೇವಮಂದಿರ ಭಜನೆ ಪೂಜೆ ಪ್ರಸಾದಗಳು । ಜೀವನದಲಂಕಾರ, ಮನಸಿನುದ್ಧಾರ ॥
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- । ದಾವುದಾದೊಡಮೊಳಿತು - ಮಂಕುತಿಮ್ಮ ॥ ॥
ಕ್ಷುಲ್ಲಕಜಗದ ತಳಹದಿಯಿಂದ ಮೇಲೆ - ಏಳುವ ಮನಸ್ಸುಳ್ಳವರಿಗೆ ದೇವ
ಸೇತುವಾಗಿ ನಿಲ್ಲಿತ್ತಾನೆ. ಆ ದೇವನೇ ಗಣೇಶ ಅಥವಾ ಗಣಪತಿ. ಆತನ ಕುರಿತಾಗಿ
ಬ್ರಹ್ಮವೈವರ್ತಪುರಾಣದಲ್ಲಿ
ಜ್ಞಾನಾರ್ಥವಾಚಕೋ ಗಶ್ಚ ಣಶ್ಚ ನಿರ್ವಾಣವಾಚಕಃ |
ತಯೋರೀಶಂ ಪರಂ ಬ್ರಹ್ಮ ಗಣೇಶಂ ಪ್ರಣಮಾಮ್ಯಹಮ್ || ಎಂದು ನಿರ್ವಚನ
ನೀಡಿದ್ದಾರೆ. ಇವ ವೇದಕಾಲದವ ಅಲ್ಲ! ಇವ ದ್ರಾವಿಡರ ದೇವ! ಇವನಿಗೆ ಆರ್ಯಮರ್ಯಾದೆಯಿಲ್ಲ! ಇವ ಗಾಂಪರ
ದೇವ! ಈ ರೀತಿ ಹಲವು ಹತ್ತು ಮಾತುಗಳಿಂದ ಸನಾತನಿಗಳಾದ ನಮ್ಮ ಮನಸ್ಸನ್ನು ಮುರಿಯುವ ಹುನ್ನಾರವೊಂದು
ಬಹುಕಾಲದಿಂದ ನಡೆದುಕೊಂಡು ಬರುತ್ತಲಿದೆ. ಇವಕ್ಕೆಲ್ಲ ಸೊಪ್ಪು ಹಾಕುವುದು ಅನಗತ್ಯ! ಎಂಬುದು ನನ್ನ
ಅಭಿಪ್ರಾಯ…. ಏಕೆಂದರೆ ವೇದಕಾಲ, ಉಪನಿಷತ್-ಕಾಲ ಸ್ಮೃತಿಕಾಲ, ಶಾಸ್ತ್ರಕಾಲ ಈ ರೀತಿ ವಿಭಾಗವೇ ಅವೈಜ್ಞಾನಿಕವಾಗಿದೆ.
ಕಾಲವನ್ನು ಬೇಕಾದಷ್ಟು ವಿಭಾಗಿಸುವ, ವಿವೇಚಿಸುವ - ಅದರದ್ದೇ ಆದ ಸಂಜ್ಞೆಗಳಿವೆ. ಸಂವತ್ಸರ, ಮನ್ವಂತರ,
ಯುಗಗಳೇ ಮೊದಲ್ಗೊಂಡು ಲವ, ತ್ರುಟಿ, ಕಲಾ, ಕಾಷ್ಠಾ ಎಂದೆಲ್ಲಾ ಕ್ಷಣ ಕ್ಷಣವನ್ನೂ ವಿಭಾಗಿಸಿ ಹೇಳಲಾಗಿದೆ.
ಇದಲ್ಲದೇ ಹಳೇಯದಾದರೆ ಶ್ರೇಷ್ಠ; ಹೊಸದು ಕನಿಷ್ಠ ಎಂಬಿತ್ಯಾದಿಯಾಗಿ ಯಾಕೆ ಈ ತರಹದ ವಿಚಾರಗಳನ್ನು ನಮ್ಮ ಮೇಲೆ
ಹೇರಲಾಗುತ್ತಿದೆ? ಪ್ರಾಜ್ಞರಂತೂ “ಪುರಾಣಮಿತ್ಯೇವ ನ ಸಾಧು ಸರ್ವಂ” ಎಂದು ಸಾರಿ ಹೇಳಲಿಲ್ಲವೇ?
ಗಣಗಳ ಅಧಿಪನಾಗಿ, ಜ್ಞಾನನಿರ್ವಾಣಕಾರಣನಾಗಿ, ಪರಬ್ರಹ್ಮನಾಗಿ ಗಣಪತಿ ಸದಾಕಾಲ, ಯಾವತ್ತೂ,
ಯುಗಯುಗಗಳಿಂದಲೂ ನಮ್ಮ ದೇವರಾಗಿ ನಮ್ಮೆಲ್ಲರಿಗೆ ವಿಘ್ನನಿವಾರಕನಾಗಿ, ಅಭೀಷ್ಟಪ್ರದನಾಗಿ ನಮ್ಮ
ಜೊತೆಯಲ್ಲಿಯೇ ಇದ್ದಾನೆ. ಇನ್ನೇನು? ನಮ್ಮೊಳಗೇ ಅವಿತಿದ್ದಾನೆ!
ಧಾಯೇತ್ಸಿಂಹಗತಂ ವಿನಾಯಕಮಮುಂ ದಿಗ್ಬಾಹುಮಾದ್ಯೇ ಯುಗೇ |
ತ್ರೇತಾಯಂ ತು ಮಯೂರವಾಹನಮಮುಂ ಷಡ್ಬಾಹುಕಂ ಸಿದ್ಧಿದಮ್ ||
ದ್ವಾಪರೇ ತು ಗಜಾನನಂ ಯುಗಭುಜಂ ರಕ್ತಾಂಗರಾಗಂವಿಭುಮ್ |
ತುರ್ಯೇ ತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ || ಹೀಗೆ ಗಣೇಶಪುರಾಣದಲ್ಲಿಯ
ಧ್ಯಾನವೊಂದನ್ನು ಪರಿಶೀಲಿಸಲಾಗಿ, ಗಣಪತಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ವಿರಾಜಮಾನನಾಗಿರುವುದು
ಸ್ಪಷ್ಟವಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲ! ಸ್ಕಾಂದ ಪುರಾಣದಲ್ಲಿ ಸ್ಕಂದ-ಋಷಿಗಳ ಸಂವಾದದಲ್ಲಿ ಪಾರ್ವತಿಯೇ
ಪರಶಿವನನ್ನು ಮೆಚ್ಚಿ ವಿವಾಹವಾಗುವಾಗ; ತನ್ನ ಬಯಕೆ ನೆರವೇರಲು ಗಣಪತಿಯನ್ನು ಸ್ಮರಿಸಿಕೊಂಡ ಸನ್ನಿವೇಶ
ವರ್ಣಿತವಾಗಿದೆ.
ಪುರಾ ಕೃತಯುಗೇ ಪುಣ್ಯೇ ಹಿಮಾಚಲಸುತಾ ಸತೀ |
ತಪಸ್ತಪ್ತವತೀ ಭೂರಿ ನ ಲಬ್ಧಾ ಸಾ ಶಿವಂ ಪತಿಮ್ ||
ತದಾಸ್ಮರತ್ಸಾ ಹೇರಮ್ಬಂ ಗಣೇಶಂ ಪೂರ್ವಜಂ ಸುತಮ್ | … ಕಲ್ಪಾಂತರದಲ್ಲಿ ತಾಯಿಯಾಗಿದ್ದ ಪಾರ್ವತಿಗೆ ಗಣಪತಿ ಪ್ರತ್ಯಕ್ಷನಾಗಿ
ಸಂಕಷ್ಟಹರಗಣಪತಿವ್ರತವನ್ನು ಬೋಧಿಸಿದ್ದು ಕಂಡುಬರುತ್ತದೆ. ಇದು ಕೃತಯುಗದ ವಿಷಯವಾಗಿದೆ.
ಹಾಗಾಗಿ ಯುಗಯುಗಗಳಲ್ಲಿ ಸದಾಸರ್ವದಾ ನಮ್ಮ ಹೃದಯದಲ್ಲಿ ವಾಸವಾಗಿರುವ ಗಣೇಶ ನಮ್ಮ ಎಲ್ಲ ಸಂಕಷ್ಟಗಳನ್ನೂ
ಪರಿಹರಿಸಲು ಸಮರ್ಥ!
ಯದಾ ಯದಾ ಪರಂ ವಿಪ್ರಾ ನರಃ ಪ್ರಾಪ್ನೋತಿ ಸಂಕಟಮ್ |
ತದಾ ತದಾ ಪ್ರಕರ್ತವ್ಯಂ ವ್ರತಂ ಸಂಕಷ್ಟನಾಶನಮ್ || ಕಷ್ಟಗಳು ಯಾರನ್ನು
ಬಿಟ್ಟಿಲ್ಲ!? ಎಲ್ಲರೂ ಒಂದಿಲ್ಲೊಂದು ಜೀವನ ಘಟ್ಟದಲ್ಲಿ ಕಷ್ಟಕ್ಕೆ ತುತ್ತಾಗುತ್ತಾರೆ. ಈ ಕಷ್ಟವನ್ನು
ಸಂಕಷ್ಟವಾಗಿಸಿಕೊಂಡು ಮನುಷ್ಯ ವಿಲಿವಿಲಿ ಒದ್ದಾಡುತ್ತಾನೆ. ಹಾಗಾದರೆ ಕಷ್ಟ ಮತ್ತು ಸಂಕಷ್ಟಗಳ ಅಂತರ
ತಿಳಿಯೋಣ.
- ಬಂದ ಕಷ್ಟ ತನಗೇ ಏಕೆ ಬಂತು?
- ತಾನು ಇಷ್ಟು ಒಳ್ಳೆಯ
ಕೆಲಸಕಾರ್ಯಗಳನ್ನು ಮಾಡಿದ್ದರೂ ದೇವ ಏಕೆ ಕಷ್ಟ ಕೊಟ್ಟ?
- ಈ ಕಷ್ಟ ಯಾವಾಗ ದೂರಾಗುತ್ತದೆ?
- ಇದು ಇನ್ನೊಬ್ಬರಿಗೆ ಯಾಕೆ
ಬರಲಿಲ್ಲ (ಬರುವುದಿಲ್ಲ)?
- ಇದರಲ್ಲೇ ದಿನವೂ ಸೊರಗಿ
ಬದುಕುವುದಕ್ಕಿಂತ ಸಾಯುವುದು ಲೇಸು!
- ಕಷ್ಟದ ಪಾತಳಿಯಿಂದ ಮನಸ್ಸನ್ನು
ಬೇರೆಡೆಗೆ ವರ್ಗಾಯಿಸಲು ಹತ್ತಿರದವರು ಎಷ್ಟೇ ಪ್ರಯತ್ನಿಸಿದರೂ; ತನ್ನ ಭಾಗ್ಯವೇ ಇಷ್ಟು!
ಎಂದು ಆ ಕಡೆ ಮುಖಮಾಡದೇ ನೊಂದುಕೊಂಡು, ಮರುಗುತ್ತಾ ಹತ್ತಿರದವರನ್ನೂ ನೋಯಿಸಿ,
ಬದುಕುವುದು...
- ಪಕ್ಕದವನು ನಕ್ಕರೆ
ಸಂಶಯಿಸುವುದು...
ಹೀಗೆ ಹಲವು ಹತ್ತು ಸಂಕಷ್ಟ ಭೂತಗಳನ್ನು(ದೆವ್ವಗಳನ್ನು) ನಿತ್ಯವೂ ಜನರ ಮಾನಸವಲಯದಲ್ಲಿ ಎದ್ದು ಕುಣಿಯುತ್ತಿರುವಂತೆ ಇರುವುದನ್ನು ಕಾಣುತ್ತೇವೆ. ಇಂಥ ಸಂದರ್ಭದಲ್ಲಿ ಕಷ್ಟವನ್ನು ಸಂಕಷ್ಟವಾಗಿಸಿಕೊಂಡ ಮನುಷ್ಯನ ಮನಸ್ಸಿಗೆ ಶಾಂತಿ ಸಮಾಧಾನವಾಗಲು; ವರ್ತುಳಾಕಾರವೂ, ಸದಾ ಚಂಚಲವೂ, ಆದ ಮನಸ್ಸು ಒಂದೆಡೆ ನೆಲೆ ನಿಲ್ಲಲು ಸಂಕಷ್ಟಹರಗಣಪತಿವ್ರತ ರಾಮಬಾಣವಾಗಿದೆ. ಎಲ್ಲ ವ್ರತಗಳೂ ಶರೀರ ತಾಪನೆಯಿಂದ ಮನಸ್ಸನ್ನು ಹದಗೊಳಿಸುವವೇ ಆಗಿವೆ. “ಸರ್ವೇ ಮನೋ ನಿಗ್ರಹ ಲಕ್ಷಣಾಂತಾಃ” ಎಂಬ ವಚನದಂತೆ ವ್ರತ ನಿಯಮಗಳು ಕಂಡ ಕಡೆ ತಿರುಗುವ ಮನಸ್ಸನ್ನು ಸ್ವಚ್ಛಗೊಳಿಸುತ್ತವೆ. ಅದಕ್ಕೆಂದೇ ಸುಮಾರು ವರ್ಷಕ್ಕೆ ಮುನ್ನೂರೈವತ್ತಕ್ಕೂ ಹೆಚ್ಚು ವ್ರತಗಳನ್ನು ನಾವು ಸನಾತನ ವ್ರತಗಳ ಯಾದಿಯಲ್ಲಿ ಕಾಣಬಹುದು.
ಈ ವ್ರತಗಳನ್ನು ನಿತ್ಯವ್ರತಗಳು ಮತ್ತು ಕಾಮ್ಯವ್ರತಗಳು; ಉಪವಾಸಾದಿ ನಿಯಮ ಪ್ರಧಾನ ವ್ರತಗಳು ಮತ್ತು ಪೂಜಾಕೈಂಕರ್ಯ ಪ್ರಧಾನವಾಗಿರುವ ವ್ರತಗಳು; ಪುರುಷರ ವ್ರತಗಳು ಮತ್ತು ಸ್ತ್ರೀಯರ ವ್ರತಗಳು; ಲೋಕಾಂತ (ಉತ್ಸವಪ್ರಧಾನ) ವ್ರತಗಳು ಮತ್ತು ಏಕಾಂತ (ವಯಕ್ತಿಕವಾದ) ವ್ರತಗಳು; ವೈದಿಕ ವ್ರತಗಳು, ಸ್ಮಾರ್ತವ್ರತಗಳು, ಪೌರಾಣಿಕ ವ್ರತಗಳು ಮತ್ತು ಲೌಕಿಕ ವ್ರತಗಳು ಹೀಗೆ ಹಲವು ಹತ್ತು ರೀತಿಯಲ್ಲಿ ವಿಭಾಗಿಸಬಹುದು....
ಪ್ರಕೃತದಲ್ಲಿ ಗಣಪತಿ ತನ್ನ ತಾಯಿಗೆ ಮದುವೆಯ
ಸಂದರ್ಭದಲ್ಲೂ, ತಂದೆಗೆ ತ್ರಿಪುರಾಸುರಸಂಹಾರ ಸಂದರ್ಭದಲ್ಲೂ, ಇಂದ್ರನಿಗೆ ಪದವಿಯಿಂದ ಚ್ಯುತನಾದ
ಸಂದರ್ಭದಲ್ಲೂ, ಹನುಮಂತನಿಗೆ ಸೀತಾನ್ವೇಷಣೆಯ ಸಂದರ್ಭದಲ್ಲೂ ಕಾರ್ಯಸಿದ್ಧಿಗಾಗಿ ಸಂಕಷ್ಟಹರ
ಗಣಪತಿವ್ರತವನ್ನು ಮಾಡಿದಾಗ; ಅವರಿಗೆ ಅಭಯವನ್ನೂ, ನಿರ್ವಿಘ್ನತೆಯನ್ನೂ, ಸಂಕಷ್ಟನಿವಾರಣೆಯನ್ನೂ
ಮಾಡಿರುತ್ತಾನೆ. ಹಾಗಾಗಿ ಸಂಕಷ್ಟದಲ್ಲಿರುವ ನಾವು ಅದರ ಪರಿಹಾರಕ್ಕೆ ಅತೀ ಯೋಗ್ಯವಾದ ನಿತ್ಯವ್ರತ
ಒಂದಿದ್ದರೆ ಅದು ಸಂಕಷ್ಟಹರಗಣಪತಿ ವ್ರತ.
ಪ್ರತಿಮಾಸಂ ತು ಯಃ ಕುರ್ಯಾತ್ - ತ್ರೀಣ್ಯಬ್ದಾನ್ಯೇಕಮೇವ ವಾ |
ದಾರಿದ್ರ್ಯಂ ನ ಭವೇತ್ತಸ್ಯ ಸಂಕಷ್ಟಂ ನ ಭವೇದಿಹ ||
ಈ ಪೌರಾಣ ವಚನವನ್ನನುಸರಿಸಿ, ಗಣಪತಿಗೆ ಮನಸ್ಸನ್ನು ಅರ್ಪಿಸಿದರೆ ಸಂಕಷ್ಟ ಪಿಶಾಚಿಗಳು
ಮನಸ್ಸಿನಿಂದ ದೂರಾಗುವುದರಲ್ಲಿ ಸಂದೇಹವಿಲ್ಲ! ಮನಸ್ಸೊಂದು ಪಕ್ವಗೊಂಡರೆ ಬದುಕೇ ಹಸನಾದಂತೆ!
ಜೀವಭಾರವನು ಮರೆತಂತೆ, ಅಲ್ಲವೇ?
ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।
ನೆನೆಯದಿನ್ನೊಂದನೆಲ್ಲವ ನೀಡುತದರಾ ॥
ಅನುಸಂಧಿಯಲಿ ಜೀವಭಾರವನು ಮರೆಯುವುದು ।
ಹನುಮಂತನುಪದೇಶ – ಮಂಕುತಿಮ್ಮ ||
ನಮ್ಮ ಮನಸ್ಸನ್ನು ಸಂಕಷ್ಟಹರ ಗಣಪತಿಯ ಪದತಳಕ್ಕೆ ಸಮರ್ಪಿಸಿ, ಶಾಂತವಾಗಿಸಿ, ಕಷ್ಟಕೋಟಲೆಗಳನ್ನು ಸಮರ್ಥವಾಗಿ ಎದುರಿಸಿ, ಬದುಕನ್ನು ಬಾಳಾಗಿಸೋಣ. ಹನುಮಂತನನ್ನು ಆದರ್ಶವಾಗಿಸಿ, ಗಣಪತಿಯನ್ನು ಆರಾಧಿಸಿ, ಆರಾಧನಾ ಮಾರ್ಗದಲ್ಲಿ ಮುಂದೆ ಸಾಗೋಣ. ಈ ಶುಭ ಸ್ಮೃತಿ ನಮ್ಮ ಮನಸ್ಸಿನಲ್ಲಿ ಸದಾ ಗಣಪತಿಯನ್ನು ನೆಲೆಯಾಗಿಸಲಿ.... ವಂದನೆಗಳು.
ಗೌರೀ ಗಣೇಶ ಹಬ್ಬದ ಶುಭಾಶಯಗಳು
ಪರಮೇಶ್ವರ ಪುಟ್ಟನ್ಮನೆ


.jpg)


