Thursday, June 23, 2016





ಮಳೆಗಾಲ!



ನೆಲ ಜಲಗಳ ಸಂಗಮ, ಜೀವ ಜಂತುಗಳ – ಉಗಮ !

ಹಸಿರುಸಿರಿನ ಪರಿಣಾಮ, ನೇಸರನುರಿಯಿಂ ಗ್ರೀಷುಮ...

ನೇಸರನುರಿಯೇನ್ ? ಗ್ರೀಷ್ಮ !


ಬೀಜ ಗೀಜಗಳ ಸಂಸ್ಪರ್ಶ, ಮೇಘ ಮಾಲೆಗಳ ಸಂಘರ್ಷ.

ಗಿಡ ದಡ ಬಗೆಯುವ - ಉತ್ಕರ್ಷ, ಉಳುವಾ ಕಾಲವೇ ಈ ವರ್ಷ...

ಉಳಿವಿನ ಕಾಲವೇ ? ಈ ವರ್ಷ !

ಪ. ಪು.
ಪರಮೇಶ್ವರ ಪುಟ್ಟನಮನೆ

No comments:

Post a Comment